Borewell Subsidy: ಭರ್ಜರಿ ಗುಡ್ ನ್ಯೂಸ್! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಅಹ್ವಾನ ಮಾಡಲಾಗಿದೆ!
Borewell Subsidy: ಎಲ್ಲಾ ರೈತ ಬಾಂಧವರಿಗೂ ನಮಸ್ಕಾರ, ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ಎಲ್ಲಾ ರೈತ ಬಾಂಧವರಿಗೆ ತಮ್ಮ ಜಮೀನಿನಲ್ಲಿ ನೀರಾವರಿ ಸೌಲಭ್ಯವನ್ನು ನೀಡಲು ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿ ಹಾಗೂ ಮಾಹಿತಿ ತಿಳಿದುಕೊಳ್ಳಿ.
ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಬಹುದೊಡ್ಡ ಆರ್ಥಿಕ ನೆರವು ಹಾಗೂ ಸಬ್ಸಿಡಿ ಸಿಗಲಿದೆ. ಹೌದು ಈ ಒಂದು ಯೋಜನೆ ಅಡಿಯಲ್ಲಿ ಎಲ್ಲ ಸಮಾಜ ಕಲ್ಯಾಣ ಇಲಾಖೆಯ ಕಡೆಯಿಂದ ಉಚಿತವಾಗಿ ಬೋರ್ವೆಲ್ ಕೊರಸಿಕೊಳ್ಳುವ ಯೋಜನೆಗೆ ಸಬ್ಸಿಡಿ ನೀಡುವ ಯೋಜನೆಗೆ ಮತ್ತೊಮ್ಮೆ ಚಾಲನೆ ದೊರಕಿದೆ.
ಇರಬೇಕಾದ ಅರ್ಹತೆಗಳು:
- ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಎಲ್ಲ ರೈತರು ನಮ್ಮ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
- ಅದೇ ರೀತಿ ಅರ್ಜಿ ಸಲ್ಲಿಸುವ ರೈತರು ಸಣ್ಣ ಅಥವಾ ಅತಿ ಸಣ್ಣ ಜಮೀನಿನ ಮಾಲೀಕರಾಗಿರಬೇಕು.
- ಹಾಗೆಯೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
- ಅರ್ಜಿ ಸಲ್ಲಿಸುವ ರೈತರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ₹1.5 ಲಕ್ಷ ರೂಪಾಯಿ ಮೀರಿರಬಾರದು.
- ಅರ್ಜಿ ಸಲ್ಲಿಸುವ ರೈತರ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ₹2 ಲಕ್ಷ ರೂಪಾಯಿ ಮೀರಿರಬಾರದು.
- ಮೊದಲು ಅರ್ಜಿ ಸಲ್ಲಿಸಿ, ಲಾಭ ಪಡೆದುಕೊಂಡಿರುವ ರೈತರು ಪುನಃ ಅರ್ಜಿಯನ್ನು ಸಲ್ಲಿಸಿದರೆ ಸ್ವೀಕರಿಸುವುದಿಲ್ಲ.
ಉಚಿತ ಬೋರ್ವೆಲ್ ಸಬ್ಸಿಡಿ ಪೂರ್ತಿ ವಿವರ ಇಲ್ಲಿದೆ:
- ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ ಈ ಜಿಲ್ಲೆಗಳಲ್ಲಿ ಸಿಗುವ ಘಟಕ ವೆಚ್ಚ ₹4.75 ಲಕ್ಷ ಇದರಲ್ಲಿ ರೈತರಿಗೆ ಸಿಗುವ ಸಬ್ಸಿಡಿ ₹4.25 ಲಕ್ಷ ಹಾಗೂ ₹50,000 ಸಾಲ.
- ಇನ್ನು ಉಳಿದಿರುವಂತಹ ಎಲ್ಲಾ ಜಿಲ್ಲೆಗಳಲ್ಲಿ ತಗಲುವ ಘಟಕ ವೆಚ್ಚ ₹3.75 ಲಕ್ಷ ಹಾಗೂ ಇದರಲ್ಲಿ ರೈತರಿಗೆ ಸಿಗುವ ಸಬ್ಸಿಡಿ ₹3.25 ಲಕ್ಷ ಹಾಗೂ ₹50,000 ಸಾಲ.
- ಉಚಿತ ಬೋರ್ವೆಲ್ ಕುರಿಸಿಕೊಂಡು ಲಾಭ ಪಡೆದ ನಂತರ ಬೋರ್ವೆಲ್ ಗೆ ವಿದ್ಯುತ್ ವ್ಯವಸ್ಥೆ ಮಾಡಿಸಲು ರೈತರಿಗೆ ₹75,000 ನೀಡಲಾಗುತ್ತದೆ.

ಬೇಕಾಗುವ ಅಗತ್ಯ ದಾಖಲೆಗಳ ವಿವರ:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆರ್ ಟಿ ಸಿ (RTC)
- ವಿಕಲಚೇತನ ಪ್ರಮಾಣ ಪತ್ರ (ಅವಶ್ಯಕತೆ ಇದ್ದರೆ)
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ (Photo)
ಈ ಯೋಜನೆಗೆ ರೈತರು ಹೇಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು?
- ಮೊದಲನೇದಾಗಿ ರೈತರು ತಮ್ಮ ಹತ್ತಿರದಲ್ಲಿರುವ (ಗ್ರಾಮ ಒನ್) ಅಥವಾ (ಕರ್ನಾಟಕ ಒನ್) ಸಹಾಯ ಕೇಂದ್ರಗಳಿಗೆ ಬೇಡಿ ನೀಡಬೇಕು.
- ನಂತರ ನಾವು ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಹಾಗೂ ತಮ್ಮ ವಿವರಗಳನ್ನು ನೀಡುವ ಮೂಲಕ ಈ ಯೋಜನೆಗೆ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದು.
- ಅಥವಾ ರೈತರು ತಮ್ಮ ಮೊಬೈಲ್ ನಲ್ಲಿಯೇ ತಮ್ಮ ಎಲ್ಲಾ ದಾಖಲೆಗಳೊಂದಿಗೆ ರಾಜ ಸರ್ಕಾರದ ಅಧಿಕೃತ ವೆಬ್ಸೈಟ್ (ಸೇವಾ ಸಿಂಧು) ವೆಬ್ಸೈಟ್ನ ಮೂಲಕ ಈ ಒಂದು ಯೋಜನೆಗೆ ಸುಲಭವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಿಕೊಳ್ಳಬಹುದು.
| ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |